ಸೀರೆ ಝಾಡಿಸಿದಳೆಂದರೆ

ಮಕ್ಕಳು ಆಡುತ್ತಿರುತ್ತವೆ
ತಾಯಿ ಮಗುವಿಗೆ ಹಾಲು ಕೊಡುತ್ತಿರುತ್ತಾಳೆ
ದುಡಿವ ಜನ ದುಡಿಯುತ್ತಿರುತ್ತಾರೆ
ಓಡಾಡುವವರು ಓಡಾಡುತ್ತಿರುತ್ತಾರೆ
ಮಲಗಿರುವವರು ಮಲಗಿರುತ್ತಾರೆ
ಕುಳಿತಿರುವವರು ಕುಳಿತಿರುತ್ತಾರೆ
ಹೊಟ್ಟೆಗೋ ಹೊಟ್ಟೆಕಿಚ್ಚಿಗೋ
ಕರುಳ ಕರೆಗೋ ಸಂಚು ಹೊಂಚುಗಳಿಗೋ
ಸೆಳೆದಾಟಗಳಿಗೋ ಹಲವರು
ಹಲವು ವಿಧಗಳಲ್ಲಿ ಬಡಿದಾಡುತ್ತಿರುತ್ತಾರೆ
ಇಲ್ಲೇ ಇಲ್ಲೇ ಶಾಶ್ವತವಾಗಿ ಇರುತ್ತೇವೆಂಬಂತೆ
ಅಷ್ಟಾವಕ್ರಗಳಲ್ಲೂ ಎಲ್ಲಾ ಸುಸೂತ್ರ
ನಡೆದಿರುತ್ತದೆ ಬದುಕು ಜಟಕಾ ಬಂಡಿ
ಇವನೆಲ್ಲ ಹೊತ್ತ ಈ ತಾಯಿ
ಸುಮ್ಮನೆ ಬಿಮ್ಮನೆ ಬೀಗಿಕೊಂಡಿದ್ದರೆ
ಎಲ್ಲ ಸಲೀಸಾಗಿ ಸಾಗುತ್ತಿರುತ್ತದೆ
ಅವಳಿಗೆ ಹೊಟ್ಟೆ ನೋವಾಗಿ
ಹೊಡೆಮರಳಿತೆಂದರೆ
ಬೇಜಾರಾಗಿ ಒಮ್ಮೆ ಮೈ ನಡುಗಿಸಿದಳೆಂದರೆ…
ಅಥವಾ ಬಾಯಿ ತೆರೆದು ಆಕಳಿಸಿದಳೆಂದರೆ….
ಅಥವಾ ಅವಳಿಗೆ ಸೀನು ಬಂದು
ಸುಡು ಸುಡು ದ್ರವದ ಸೀನು
ಸೀದಿದಳೆಂದರೆ….
ಅಥವಾ ತನ್ನ ಸೀರೆ ನೆರಿಗೆಗಳ
ಸರಿಪಡಿಸಿಕೊಳ್ಳಲು ಸೀರೆ ಝಾಡಿಸಿದಳೆಂದರೆ…
ಅಥವಾ ಯಾಕಾದರೂ ನಿಟ್ಟುಸಿರು ಬಿಟ್ಟು
ಭೋರೆಂದು ಉಸಿರು ಬಿಡತೊಡಗಿದಳೆಂದರೆ…
ನಿಂತವರು ನಿಂತಲ್ಲಿ ಕುಂತವರು ಕುಂತಲ್ಲಿ
ಮಲಗಿದವರು ಅಲ್ಲೆ ಓಡಾಡುವವರು ಅಲ್ಲಲ್ಲೆ
ಬಡಿದಾಡುವವರು ಕಚ್ಚಾಡುವವರು
ಪ್ರೀತಿಸುವವರು ರಮಿಸುವವರು
ರೋಗಿಗಳು ಭೋಗಿಗಳು ಯುವಕರು ಮುದುಕರು
ಕೂಸು ಕುನ್ನಿ ಗಂಡು ಹೆಣ್ಣು ಎಲ್ಲ ಎಲ್ಲರೂ
ನೆಲಸಮ ಮಣ್ಣಲ್ಲಿ ಮಣ್ಣು
ಇಲ್ಲಿ ಉಳಿದ ಬಾಯಿ ಬಡಕೊಳ್ಳುವವರು
ಪತ್ರಿಕೆ-ಆಕಾಶವಾಣಿ-ದೂರವಾಣಿ ಸುದ್ದಿಗಳಿಗೆ
ಕೆಲವು ದಿನ ಆಹಾರ ಸಿಗುವುದು
ಅನುಕಂಪಗಳ ಸುರಿಮಳೆ ಸುರಿಯುತ್ತದೆ
ಸಹಾಯ ಹಸ್ತ ಭೂಮಂಡಲದುದ್ದ ಚಾಚುತ್ತವೆ
ಕೆಲಕಾಲ ಗತಿಸಿದಂತೆಲ್ಲಾ
ಈ ತಾಯಿಯ ಮೈಮೇಲಾದ ಗಾಯ
ಮಾದು ಹೋಗಿಬಿಡುತ್ತವೆ
ಎಂದಿನಂತೆ ಆಡುವವರು ಆಡುತ್ತಾರೆ
ಹೊಡೆದಾಡುವವರು ಹೋರಾಡುವವರು
ದುಡಿಯುವವರು ದುಃಖಿಸುವವರು
ನಗುವವರು ಕೆಲೆಯುವವರು
ತಂತಮ್ಮ ಪರಿಗಳ ಬದುಕುತ್ತಾರೆ
ಮತ್ತೆ ಈ ತಾಯಿ ಸುಮ್ಮನೆ ಬಿಮ್ಮನೆ
ಬೀಗುತ್ತ ಸಾಗುತ್ತಾಳೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಲ್ಲ
Next post ಡಿ.ಆರ್‍. ಡಿಯರ್‍

ಸಣ್ಣ ಕತೆ

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

cheap jordans|wholesale air max|wholesale jordans|wholesale jewelry|wholesale jerseys